ತೀ ನಂ ಶ್ರೀ

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು
ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು.
ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು
ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು!
ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ
ಕಡಲ ಚಿತ್ರವನು ಕಣ್ಣಾಗಿ ಈಜಿದೆವು.

ಪ್ರಕ್ಷೇಪ ಲೋಪ ಲಿಪಿಕಾರನಕ್ಷರಪಾಪ
ಕೋಪಗತ್ತರಿ ಬಾಯ್ಗೆ ಕೈಕಾಲುಗಳ ತೆತ್ತು,
ಮುಖಸತ್ತು ನರಳುವೆಷ್ಟೋ ಮಾತ ಎಡೆ ಹಿಡಿದು
ಹೆಕ್ಕಿ ಕರುಣೆಯಲಿ ಮುಖ ಮೈ ಸವರಿ ನೇಹದಲಿ,
ಗತಜೀವನದ ಶೋಕಕಥೆಗೆ ಕಿವಿಗೊಟ್ಟಿರಿ,
ಮೈತಿದ್ದಿ ಮತ್ತೆ ಮುನ್ನಿನ ಬಾಳನಿತ್ತಿರಿ.

ಮಾಸಿದ ಮಹಾಚಿತ್ರಗಳ ಗೆರೆಗಳನು ತಿದ್ದಿ
ಮತ್ತೆ ಮೆರುಗಿತ್ತ ನುಡಿಚಿತ್ರಕಾರರು ನೀವು;
ಬಿತ್ತದಲಿ ಮರ ಕಂಡ ಬುದ್ಧಿಭೀಮರು. ನಮ್ಮ
ನುಡಿಗಂಟನೆಷ್ಟೊ ಬಿಚ್ಚಿದಿರಿ, ಮೆಚ್ಚುವ ರೀತಿ
ಹೊಚ್ಚಿದಿರಿ ಶಾಸ್ತ್ರವಸ್ತ್ರವನು ಕಾವ್ಯದ ಮೈಗೆ.

ಮುಖದೆಲ್ಲ ಚೆಲುವು ಮಡಿ ಗೆಲುವು ಎತ್ತರ ನಿಲುವೆ
ಗೆರೆಗೊಂಡಿತೆಂಬಂತೆ ಸ್ವಲ್ಪ ಬರೆದಿರಿ. ಏಕೆ,
ಹತ್ತು ತಲೆ ಬೇಕೆ ಚೆಲುವನು ಮೆರೆಸೆ? ರಾಮರುಚಿ;
ಎಲ್ಲ ಬಳಸಲೆಬೇಕು ನಿತ್ಯಪಾರಾಯಣಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಯಮ
Next post ತೇರು ಎಳೆ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys